ಶ್ರೀ ಮಹಾಲಕ್ಶ್ಮೀ ದೇವಸ್ಥಾನದಲ್ಲಿ ದಾಸ ಸಂಕೀರ್ತನೆ ಭಜನಾ ಕಾರ್ಯಕ್ರಮ. ವೇದಮುರ್ತಿ ಚಿದಂಬರ. ದ. ಜೋಶಿ ನೇತೃತ್ವ.
Author : Vinayak M Bhat
ಕಲಘಟಗಿಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶ್ರೀ ಶಾರದಾ ಭಜನಾ ಮಂಡಳಿ ವತಿಯಿಂದ ಅಧಿಕ ಮಾಸ ಪರಿಯಂತ ನಡೆದ ದಾಸ ಸಂಕೀರ್ತನೆ ಕಾರ್ಯಕ್ರಮದ ಸಾಂಗತಾ ನಿಮಿತ್ತ ಲಕ್ಷ ಕುಂಕುಮಾರ್ಚನೆಯನ್ನು ನೆರವೇರಿಸಲಾಯಿತು. ಬೆಳಿಗ್ಗೆ ಶ್ರೀ ದೇವಿಗೆ ಶ್ರೀ ಸೂಕ್ತ ಪೂರ್ವಕ ವಿಶೇಷ ಅಭಿಷೇಕ,ಅಲಂಕಾರವನ್ನು ನೆರವೇರಿಸಲಾ ಯಿತು

ದೇವಸ್ಥಾನದ ಅರ್ಚಕರಾದ ವೇ. ಮೂ.ಚಿದಂಬರ.ದ.ಜೋಶಿಯವರು ಕಾರ್ಯಕ್ರಮದ ನೇತೃತ್ವವನ್ನು ವಹಿಸಿ ಅಧಿಕ ಮಾಸದ ಮಹತ್ವ ಹಾಗೂ ಆಚರಣೆಯ ಫಲ ವಿವರಿಸಿದರು.

ಈ ಸಂಧರ್ಭದಲ್ಲಿದೇವಸ್ಥಾನ ಮಂಡಳಿಯ ಲಕ್ಷ್ಮಿಬಾಯಿ ಮ ಕಡ್ಲಾಸ್ಕರ, ಅಂಕಿತಾ ಕಡ್ಲಾಸ್ಕರ, ನಂದಾ ಕಡ್ಲಾಸ್ಕರ, ರೋಹಿಣಿ ಕಡ್ಲಾಸ್ಕರ, ಶ್ರೀ ಶಾರದಾ ಭಜನಾ ಮಂಡಳಿಯ ವೀಣಾ ಶೇವಡೆ , ಅಪರ್ಣಾ ಶೇವಡೆ, ಅರುಂಧತಿ ಕುಲಕರ್ಣಿ, ದೀಪಾ ಪಂಡಿತ, ಚಿಂತಿತಾ ಜೋಶಿ , ಅರುಂಧತಿ ಜೋಶಿ , ಲಕ್ಷ್ಮೀ ಜೋಶಿ ಪದ್ಮಾವತಿ ಜೋಶಿ, ಮಂಜುಳಾ ಲಕ್ಷ್ಮೇಶ್ವರ ಸುಧಾ ಶೆಟ್ಟಿ , ಸುರೇಖಾ ದೈವಜ್ಞ, ಕಲ್ಪನಾ ದೈವಜ್ಞ, ಶಾಂತಾ ಲೋಕರೆ, ಪೂಜಾ ಪಂಡಿತ,ಮಾದರಿ ಪೂಜಾರ , ಪಾಂಡುರಂಗ ಜೋಶಿ ಮುರಳಿಧರ ಪೂಜಾರ ವೈದಿಕ ಸೇವೆನಡೆಸಿಕೊಟ್ಟರು,ಹಾಗೂ ಅನೇಕ ಭಕ್ತಾದಿಗಳು ಪಾಲ್ಗೊಂಡು ಧನ್ಯತೆ ಮೆರೆದರು.















