ಬೈಕ್ ಅಪಘಾತ 21ವರ್ಷದ ಯುವಕ ಭರತ್ ದುರ್ಮರಣ.
Author : Vinayak M Bhat
ಪಟ್ಟಣದ ಹುಬ್ಬಳ್ಳಿ ಕಾರವಾರ ರಾಷ್ಟ್ರೀಯ ಹೆದ್ದಾರಿ 63ರ ಎ. ಪಿ.ಎಂ.ಸಿ.ಯ ನಿಗದಿ ಕಾಂಪ್ಲೆಕ್ಸ್ ಬಳಿ ಸಂಭವಿಸಿದ ದುರ್ಘಟನೆ ಯಲ್ಲಿ ಗಾಂಧೀನಗರ ನಿವಾಸಿ 21ವರ್ಷದ ಭರತ್ ನಾಗರಾಜ ಬಂಡಿವಡ್ಡರ ಎಂಬ ಯುವಕ ಮೃತಪಟ್ಟಿದ್ದಾನೆ, ಹಿಂಬದಿ ಸವಾರ 18 ವರ್ಷದ ವಿನಾಯಕ ದೀಪಕ್ ವಾಣಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೇಲ್ನೋಟಕ್ಕೆ ಆಕಳಿಗೆ ಡಿಕ್ಕಿ ಸಂಭವಿಸಿ ಬಳಿಕ ಲಾರಿ ಡಿಕ್ಕಿ ಆಗಿದೆ, ಹಿಂದಿನಿಂದ ಬಂದ ಲಾರಿ ಭರತನ ಭುಜದ ಮೇಲೆ ಹರಿದು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ
ಕಲಘಟಗಿ ಆರಕ್ಷಕ ಸಿಬ್ಬಂದಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.














