ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ :ಡಾ. ಕುರಗುಂದ.
Author : Vinayak M Bhat
ಸೃಷ್ಟಿಯ ಮೂಲವೇ ಪರಿಸರ, ಇದರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ದುಮ್ಮವಾಡದ ಮುಖ್ಯ ಪಶು ವೈದ್ಯಧಿಕಾರಿ ಡಾ. ಎಂ. ವಿ.ಕುರಗುಂದ ಹೇಳಿದರು.
ತಾಲೂಕಿನ ದುಮ್ಮವಾಡ ಗ್ರಾಮದ ಪಶು ಆಸ್ಪತ್ರೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯಲ್ಲಿ ತೆಂಗಿನ ಸಸಿ (ನಾರಿಕೆಳ)ಸಸಿ ಹಚ್ಚಿ ಮಾತನಾಡಿದರು. ಮನುಕುಲದಲ್ಲಿ ಹುಟ್ಟಿದ ನಾವೆಲ್ಲರೂ ಆದಷ್ಟು ಗಿಡಮರಗಳನ್ನು ಹಚ್ಚಬೇಕು, ಪೋಶಿಸಿ ಬೆಳೆಸಬೇಕು, ಸಮ ಪ್ರಮಾಣದ ಆಮ್ಲಜನಕ ಹಾಗೂ ಇಂಗಾಲದ ಡೈ ಅಕ್ಸಾಯ್ಡ್ ಉತ್ಪತ್ತಿ ಆಗಿ ವಾತಾವರಣ ರಕ್ಷಿಸಲ್ಪಡುತ್ತದೆ ಎಂದರು.
ಈ ಸಂಧರ್ಭದಲ್ಲಿ ಎಂ ಎಸ್ ಘಂಟಿ, ಚೆನ್ನಪ್ಪ ವಾಲಿಶೆಟ್ಟರ,ದುಮ್ಮವಾದ ವಿಭಾಗದ ಪಶು ಸಖಿಯರಾದ ದೀಪಾ ಕಟ್ಟಿಮನಿ, ಶಾಂತವ್ವ ಆಸ್ತಮಟ್ಟಿ, ಕು. ರಂಜಿತಾ ಲಕ್ಕಪ್ಪನವರ, ಲಕ್ಶ್ಮೀ ಎತ್ತಿನಮನಿ, ಸವಿತಾ ಎಮ್ಮೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು.














